Admission

..KERALA'S ONLY ONE GOVT KANNADA PRE PRIMARY SCHOOL , GWLP SCHOOL MANJESHWAR............". .......

Monday 25 August 2014

ಧ್ವಜಾರೋಹಣ


ಶಾಲಾ ಎಸೆಂಬ್ಲಿ


ಸಭಾ ಕಾರ್ಯಕ್ರಮ


ಸಾಂಸ್ಕೃತಿಕ ಕಾರ್ಯಕ್ರಮಗಳು

68ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಪಿ.ಟಿ.ಎ.ಅಧ್ಯಕ್ಷೆ ಶ್ರೀಮತಿ ರಾಜೀವಿ ನೆರವೇರಿಸಿದರು.ಬಳಿಕ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಹಿರಿಯ ಅಧ್ಯಾಪಕ ಶ್ರೀ ಜಯಂತ ವಹಿಸಿದರು.ಪಿ.ಟಿ.ಎ.ಅಧ್ಯಕ್ಷೆ ಶ್ರೀಮತಿ ರಾಜೀವಿ ಉದ್ಘಾಟಿಸಿದರು.ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಅಧ್ಯಾಪಕೆ ಸೊನಿಯಾ ಸ್ವಾಗತಿಸಿ,ಅಧ್ಯಾಪಕೆ ಸುಮಯ್ಯ ಧನ್ಯವಾದಗೈದರು.ಅಧ್ಯಾಪಕ ಜಬ್ಬಾರ್.ಬಿ ನಿರೂಪಿಸಿದರು.ಹೆಚ್ಚಿನ ಸಂಖ್ಯೆಯಲ್ಲಿ ರಕ್ಷಕರು ಭಾಗವಹಿಸಿದರು.

Sunday 10 August 2014

ಸಾಕ್ಷರ

ದಿನಾಂಕ 6/8/14 ರಂದು 'സാക്ഷര2014' ಉದ್ಘಾಟನೆಯಾಯಿತು.ಪಿ.ಟಿ.ಎ ಅಧ್ಯಕ್ಷರಾದ ರಾಜೀವಿ ಉದ್ಘಾಟಿಸಿದರು.ಹಿರಿಯ ಅಧ್ಯಾಪಕ ಜಯಂತ ಸರ್ ಅಧ್ಯಕ್ಷತೆ ವಹಿಸಿದರು.ಅಧ್ಯಾಪಕಿ ಸೊನಿಯಾ ಸ್ವಾಗತಿಸಿ,ಅಧ್ಯಾಪಕಿ ಸುಮಯ್ಯ ವಂದಿಸಿದರು. .ಅಧ್ಯಾಪಕ ಜಬ್ಬಾರ್.ಬಿ ಕಾರ್ಯಕ್ರಮವನ್ನು ನಿರೂಪಿಸಿ ಸಾಕ್ಷರದ ಮಹತ್ವವನ್ನು ವಿವರಿಸಿದರು.ಕೆಲವು ರಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

ಸಾಕ್ಷರ 2014

Saturday 9 August 2014


ಶಾಲಾ ಮಂತ್ರಿಮಂಡಲದ ಚುನಾವಣೆಯು ದಿನಾಂಕ 8/8/2014 ರಂದು ಶುಕ್ರವಾರ ಜರಗಿತು.ಮಕ್ಕಳು ತಮ್ಮ ಗುರುತುಚೀಟಿಯೊಂದಿಗೆ ಮತ ಚಲಾಯಿಸಲು ಸಾಲಾಗಿ ನಿಂತು ಮತ ಚಲಾಯಿಸಿದರು. ವಿವಿಧ ಚುನಾವಣಾಧಿಕಾರಿಗಳಾಗಿ ಶಾಲಾ ಮಕ್ಕಳು ಕಾರ್ಯಾಚರಿಸಿದರು.ಈ ಕಾರ್ಯಕ್ರಮವು 'ಸಮಾಜ ವಿಜ್ಞಾನ ಕ್ಲಬ್' ನ ನೇತ್ರತ್ವದಲ್ಲಿ ಸಂಪನ್ನಗೊಂಡಿತು.

ವಿಶ್ವ ಪರಿಸರ ದಿನ

ವಿಶ್ವ ಪರಿಸರ ದಿನಾಚರಣೆಯ ಧ್ಯೇಯ ಉದ್ದೇಶಗಳನ್ನು  ಅಧ್ಯಾಪಕರಾದ ಶ್ರೀ ಜಬ್ಬಾರ್ .ಬಿ  ವಿವರಿಸುತ್ತಿರುವುದು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ,Incharge Headmaster ಶ್ರೀ ಜಯಂತ .ಎಂ ಗಿಡ ವಿತರಿಸುವ ಮೂಲಕ  ಉದ್ಘಾಟಿಸುತ್ತಿರುವುದು.